ಕಕ್ಯಪದವು : ಬಂಟ್ವಾಳ ತಾಲೂಕು ಮಟ್ಟದ 17ರ ವಯೋಮಾನದ ಪ್ರೌಢಶಾಲಾ ಮತ್ತು 14 ರ ವಯೋಮಾನದ ಪ್ರಾಥಮಿಕ ಬಾಲಕ ಬಾಲಕಿಯರ ಚೆಸ್ ಪಂದ್ಯಾಟವನ್ನು 6.8.2026ರಂದು ಗುಣಶ್ರೀ ವಿದ್ಯಾಲಯ ಸಿದ್ಧಕಟ್ಟೆಯಲ್ಲಿ ನಡೆಸಲಾಯಿತು. ನಮ್ಮ ಎಲ್ .ಸಿ .ಆರ್ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ 9ನೇ ತರಗತಿಯ ವಿದ್ಯಾರ್ಥಿ ವಂಶಿತ್ ,ಪ್ರಾಥಮಿಕ ವಿಭಾಗದ ಅಭಿನವ್ ಪ್ರಭು 7 ನೇ ತರಗತಿ, ಹಾಗೂ 7 ನೇ ತರಗತಿಯ ನಮನ್ . ಸಿ ಶೆಟ್ಟಿ ಭಾಗವಹಿಸಿದ್ದು ಇವರಲ್ಲಿ ಅತ್ಯುತ್ತಮ ಕೌಶಲ್ಯ ಪ್ರದರ್ಶಿಸಿದ 7 ನೇ ತರಗತಿಯ ವಿದ್ಯಾರ್ಥಿ ನಮನ್ .ಸಿ. ಶೆಟ್ಟಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ವಿಜೇತ ವಿದ್ಯಾರ್ಥಿ ಯನ್ನು ಸಂಸ್ಥೆಯ , ಪ್ರಾಂಶುಪಾಲರಾದ ಜೋಸ್ಟನ್ ಲೋಬೋ ಸಂಯೋಜಕರಾದ ಯಶವಂತ್ ಜಿ. ನಾಯಕ್ ಹಾಗೂ ಮುಖ್ಯೋಪಾಧ್ಯಾಯಿನಿ ಯಾದ ಶ್ರೀಮತಿ ವಿಜಯ ಕೆ ಇವರು ಅಭಿನಂದಿಸಿ ಜಿಲ್ಲಾಮಟ್ಟದ ಸ್ಪರ್ಧೆಯಲ್ಲೂ ಇದೇ ರೀತಿ ಸಾಧನೆ ಮಾಡುವಂತೆ ಶುಭ ಹಾರೈಸಿದರು .