ಕುಂಜಿಬೆಟ್ಟು, 19 ನವೆಂಬರ್ 2024: ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ, ಕಾಲೇಜಿನ ಉಪೇಂದ್ರ ಮಂಟಪದಲ್ಲಿ ಜರಗಿತು. ಎಡ್ವೈಸ್ – ಡಿಜಿಟಲ್ ಲೈಬ್ರರಿ ಸಂಸ್ಥೆಯ ಸಂಸ್ಥಾಪಕ ಧೀರಜ್ ಮಂಗಳೂರು ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಮಹತ್ವ ಮತ್ತು ಬಳಕೆಯ ಕುರಿತಾಗಿ ಮಾಹಿತಿ ನೀಡಿ ಡಿಜಿಟಲ್ ಲೈಬ್ರರಿಯ ಪ್ರಾತ್ಯಕ್ಷಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಂಥಾಲಯ ಸಪ್ತಾಹದ ಕುರಿತಾಗಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಧೃತಿ ಎಸ್ ಪೂಜಾರಿ ಪ್ರಥಮ ಬಿಕಾಂ, ಗೌತಮ್ ಕಾಂಚನ್ ತೃತೀಯ ಬಿಬಿಎ, ರವೀಶ್ ದ್ವಿತೀಯ ಬಿಬಿಎ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ವಿತರಿಸಲಾಯಿತು.ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು.ಕಾಲೇಜಿನ ಗ್ರಂಥಪಾಲಕಿ ಶ್ರೀಮತಿ ಪಲ್ಲವಿ ಕಾರ್ಯಕ್ರಮ ಸಂಯೋಜಿಸಿದರು.ಶ್ರೇಯಾ ತೃತೀಯ ಬಿಬಿಎ ಸ್ವಾಗತಿಸಿದರು, ವರ್ಷ ಕಾಮತ್ ದ್ವಿತೀಯ ಬಿಕಾಂ ಕಾರ್ಯಕ್ರಮ ನಿರೂಪಿಸಿದರು.