ಮಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಅಕ್ಟೋಬರ್ ೨೫ರಂದು ಆಯೋಜಿಸಿದ್ದ, ಮಂಗಳೂರಿನ ಕಪಿತಾನಿಯೋ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ. ಕ್ವಿಜ್ ಸ್ಪರ್ಧೆಯಲ್ಲಿ ಸುದಾನ ಪ್ರೌಢ ಶಾಲೆಯ ಜೆರಿಟ್ ಪಿ ಜೆ (ಶ್ರೀ. ಜೊಸೆಫ್ ಮತ್ತು ಶ್ರೀಮತಿ. ಜೂಲಿಯಟ್ ಪ್ರಮೀಳಾ ಸಿ ಜೆ ರವರ ಮಗ), ಅನಿಶ್ ಎಲ್ ರೈ (ಶ್ರೀ ಲಕ್ಷ್ಮೀನಾರಾಯಣ ರೈ ಮತ್ತು ಶ್ರೀಮತಿ. ಸೀಮಾ ಎಲ್ ರೈ ರವರ ಮಗ), ರಿಷಿಕ್ ಕೆ. ಎಲ್ (ಶ್ರೀ. ಲೊಕೇಶ್ ಕೆ ಜೆ ಮತ್ತು ಶ್ರೀಮತಿ. ಅಕ್ಷತ ಪಿ ರವರ ಮಗ) ವಿಜೇತರಾಗಿದ್ದು ಮುಂದೆ ನಡೆಯಲಿರುವ ಮೈಸೂರು ವಿಭಾಗೀಯ ಮಟ್ಟದ ಕ್ವಿಜ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆೆ.
ವಿಜೇತರನ್ನು ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ಮುಖ್ಯ ಶಿಕ್ಷಕಿ. ಶ್ರೀಮತಿ. ಶೋಭಾ ನಾಗರಾಜ್ ಅಭಿನಂದಿಸಿ ಶುಭಹಾರೈಸಿದ್ದಾರೆ. ಇವರಿಗೆ ಶಾಲೆಯ ಕಂಪ್ಯೂಟರ್ ಶಿಕ್ಷಕರಾದ ಶ್ರೀ ಸುಂದರ್ ನಾವೂರ್ ರವರುಮಾರ್ಗದರ್ಶನ ಮಾಡಿದ್ದಾರೆ.