ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಬೆಂಗಳೂರಿನ ಬಸವನಗುಡಿ ಈಜುಕೊಳದಲ್ಲಿ ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ೧೭ ರ ವಯೋಮಾನದ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಸುದಾನ ವಸತಿಯುತ ಶಾಲೆಯ ಅನಿಖಾ ಯು (೧೦ನೇ) ಇವರು ೨೦೦ಮೀ ಬಟರ್ ಫ್ಲೆನಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ ೫೦ ಮೀ ಬ್ರೆಸ್ಟ್ ಸ್ಟ್ರೊಕ್ ನಲ್ಲಿ ಕಂಚಿನಪದಕ, ೪೧೦೦ ಮೀ ಮೆಡ್ಲೆ ರಿಲೇಯಲ್ಲಿ ಕಂಚು, ಹಾಗೂ ೪*೧೦೦ ಮೀ ಫ್ರೀ ಸ್ಟೆಲ್ ನಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ. ಇವರು ಕಾರ್ಜಾಲು ‘ಕನಸು’ ನಿಲಯದ ಶ್ರೀಮತಿ. ಸೀಮಾ ಎಸ್.ರಾವ್
ಇವರ ಸುಪುತ್ರಿಯಾಗಿರುತ್ತಾರೆ.
೧೭ ರ ವಯೋಮಾನದ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ನಿಕೋಲಸ್ ರೊನಿನ್ ವಥಾಯಸ್ (೧೦ನೇ) ಇವರು ೪*೧೦೦ ಮೀ ಫ್ರೀ ಸ್ಟೆöÊಲ್ ರಿಲೇಯಲ್ಲಿ ಕಂಚಿನ ಪದಕ ಪಡೆದಿರುತ್ತಾರೆ. ಇವರು ಶ್ರೀಯುತ ರಂಜಿತ್ ಮಥಾಯಸ್ ಹಾಗೂ ಶ್ರೀಮತಿ. ಸೌಮ್ಯ ದಂಪತಿಗಳ ಸುಪುತ್ರರಾಗಿರುತ್ತಾರೆ.
ಇವರಿಗೆ ಪುತ್ತೂರು ಬಾಲವನ ಈಜುಕೊಳದ ತರಬೇತುದಾರರಾದ ಶ್ರೀಯುತ. ದೀಕ್ಷಿತ್, ಶ್ರೀಯುತ
ತ್ರಿಶೂಲ್, ಶ್ರೀಯುತ ವಿಶಾಲ್, ಶ್ರೀಯುತ. ಸೀತರಾಮ್ ಹಾಗೂ ಶ್ರೀಮತಿ. ಪ್ರಫುಲ ತರಬೇತಿಯನ್ನು ನೀಡಿರುತ್ತಾರೆ. ವಿಜೇತರನ್ನು ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್, ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಅಭಿನಂದಿಸಿ ಶುಭ ಹಾರೈಸಿದ್ದಾರೆ.