ಉಜಿರೆ, 05 ಸೆಪ್ಪೆಂಬರ್ 2025: ಶ್ರೀಧ.ಮಂ ಅನುದಾನಿತ ಸೆಕೆಂಡರಿ ಶಾಲೆ ಉಜಿರೆ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಸೆಪ್ಪೆಂಬರ್ ೦೮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ಸುರೇಶ್ ರವರು ಡಾ..ಸರ್ವೆಪಲ್ಲಿ ರಾಧಾಕೃಷ್ಣರವರ ಬಗ್ಗೆ ಶಿಕ್ಷಕರ ದಿನಾಚರಣೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
೧೦ನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು ವಿದ್ಯಾರ್ಥಿಗಳಾದ ಫಾತಿಮತ್ ಶೈಮಾ ಶಿಕ್ಷಕರಿಗೆ ಸ್ಮರಣಿಕೆ ಪಟ್ಟಿಯನ್ನು ವಾಚಿಸಿದರು ರಕ್ಷಿತಾ ಸ್ವಾಗತಿಸಿದರು. ನವ್ಯಶ್ರೀ ಧನ್ಯವಾದ ಸಮರ್ಪಿಸಿದರು. ನಿಶಿತ್ ಕಾರ್ಯಕ್ರಮ ನಿರೂಪಿಸಿದರು.