ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ತೆಯ ವಿದ್ಯಾರ್ಥಿಗಳು ಪುತ್ತೂರು ತಾಲೂಕು ದಸರಾ ಕ್ರೀಡಾಕೂಟದಲ್ಲಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
೮ನೇ ತರಗತಿಯ ವಿದ್ಯಾರ್ಥಿನಿ ದೃಶಾನ ಎಸ್ಸ ರಳಿಕಾನ ೧೦೦ ಮೀ ಓಟದಲ್ಲಿ ಬೆಳ್ಳಿ, ೨೦೦ ಮೀ ಓಟದಲ್ಲಿ ಚಿನ್ನ ಹಾಗೂ ೪x೧೦೦ ರಿಲೇಯಲ್ಲಿ ಬೆಳ್ಳಿಯ ಪದಕವನ್ನ ಪಡೆದಿರುತ್ತಾಳೆ. ೧೦ನೇ ತರಗತಿಯ ಹಿತಾಲಿ ಪಿ ಶೆಟ್ಟಿ ಚಕ್ರ ಎಸೆತದಲ್ಲಿ ಕಂಚಿನ ಪದಕವನ್ನ ಪಡೆದಿರುತ್ತಾಳೆ. ೯ನೇ ತರಗತಿಯ ತನ್ವಿ ಎ ರೈ, ಪೂರ್ವಿ ವಿ, ಬಿ ತ್ರಿಶಾ ಹಾಗೂ ದೃಶಾನ ಎಸ್ ಸರಳಿಕಾನ ಇವರು ೪x೧೦೦ ರಿಲೇಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ೯ನೇ ತರಗತಿಯ ರಕ್ಷಾ ಎಸ್ ಎಸ್, ಮನಸ್ವಿ ಎಸ್ ಪಿ, ಅದಿತಿ ಶೆಟ್ಟಿ ಹಾಗೂ ಪೂರ್ವಿ ವಿ ೪x೪೦೦ ಮೀ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ೮ನೇ ತರಗತಿಯ ಬಿ ತ್ರಿಶಾ ೪೦೦ ಮೀ ಓಟದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.