ಕುಂದಾಪುರ 12 ನವೆಂಬರ್ 2024: ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ ‘ವಿಧಿಕ್ತ 2024’ ಕಾನೂನು ಅರಿವಿನ ಅಂತರ್ ತರಗತಿ ಸ್ಪರ್ಧೆ ಯಶಸ್ವಿಯಾಗಿ ಸಂಪನ್ನಗೊಂಡಿತು.

ವಿದ್ಯಾರ್ಥಿಗಳಿಗೆ ಕಾನೂನಿನ ಪ್ರಾಯೋಗಿಕ ಅಂಶಗಳನ್ನು ಅರ್ಥ ಮಾಡಿಸುವ ಹಾಗೂ ಕಾನೂನಿನ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಲು ಸಹಕರಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಸ್ಪರ್ಧೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ಬಾರ್ ಅಸೋಸಿಯೇಷನ್ ಇದರ ಮಾಜಿ ಅಧ್ಯಕ್ಷರು ಹಾಗೂ ಹೆಸರಾಂತ ವಕೀಲರಾದ ಬಿ. ಸೋಮನಾಥ ಹೆಗ್ಡೆ ಮಾತನಾಡಿ, ಕಾನೂನು ಶಿಕ್ಷಣವು ಕೇವಲ ಪಠ್ಯಕ್ರಮದಲ್ಲಿ ಸೀಮಿತವಾಗಿರದೆ ಮೂಟ್ ಕೋರ್ಟ್ ಮಾದರಿ ಆಧಾರಿತ ಇಂತಹ ಸ್ಪರ್ಧೆಗಳು ಕಾನೂನೇತರ ಕಾಲೇಜುಗಳು ಆಯೋಜಿಸಿದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಪ್ರಾಯೋಗಿಕ ಜ್ಞಾನ ಮತ್ತು ಗಣನೀಯ ಮೌಲ್ಯಗಳು ಸೇರಿದಂತೆ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅವರು ಮಾತನಾಡಿ ಬಿ.ಬಿ. ಹೆಗ್ಡೆ ಕಾಲೇಜನ್ನು ಮಾದರಿ ಕಾಲೇಜನ್ನಾಗಿ ರೂಪಿಸುವಲ್ಲಿ ಇಂತಹ ವಿಭಿನ್ನ ವಿದ್ಯಾರ್ಥಿ ಕೇಂದ್ರಿತ ಸ್ಪರ್ಧೆಗಳು ಸಹಕಾರಿಯಾಗುತ್ತವೆ ಎಂದರು. ಮುಖ್ಯ ತೀರ್ಪುಗಾರರಾಗಿ ಆಗಮಿಸಿದ್ದ ವಕೀಲರಾದ ಜಗದೀಶ್ ರಾವ್ ಹಾಗೂ ರಯಾನ್ ಫೆರ್ನಾಂಡಿಸ್ಕಾ ರ್ಯಕ್ರಮದ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿ, ವಿಭಾಗ ಹಮ್ಮಿಕೊಳ್ಳುವ ಇಂತಹ ವಿಶೇಷ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಪ್ರಯೋಗಾಧಾರಿತ ಪ್ರಚಲಿತ ಶೈಕ್ಷಣಿಕ ಜಾಯಾಮಾನಕ್ಕೆ ಒಗ್ಗಿಕೊಳ್ಳುವಲ್ಲಿ ವಿಶೇಷ ಸಹಾಯ ನೀಡುತ್ತದೆ ಎಂದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ಭಟ್ ಸ್ವಾಗತಿಸಿ, ಸಂಯೋಜಕರಾದ ಸತೀಶ್ ಶೆಟ್ಟಿ ಬಹುಮಾನ ವಿತರಣಾ ಪಟ್ಟಿ ವಾಚಿಸಿ, ಸುಹಾಸ್ ಜೆ.ಜಿ. ವಂದಿಸಿ, ವಾಣಿಜ್ಯ ಪ್ರಾಧ್ಯಾಪಕಿ ದೀಪಾ ಪೂಜಾರಿ ನಿರೂಪಿಸಿದರು.

ಭಾಗವಹಿಸಿದ ಒಟ್ಟು 16 ತರಗತಿವಾರು ತಂಡಗಳಲ್ಲಿ ಪ್ರಥಮ ಬಹುಮಾನವನ್ನು ಅಂತಿಮ ಬಿ.ಕಾಂ. (ಡಿ) ಹಾಗೂ ಅಂತಿಮ ಬಿಸಿಎ (ಎ) ಹಂಚಿಕೊAಡರೆ, ದ್ವಿತೀಯ ಬಹುಮಾನವನ್ನು ಅಂತಿಮ ಬಿ.ಕಾಂ. (ಎ) ಹಾಗೂ ತೃತೀಯ ಬಹುಮಾನವನ್ನು ದ್ವಿತೀಯ ಬಿ.ಕಾಂ. (ಸಿ) ಪಡೆದರು. ‘ವಿಧಿಕ್ತ’ ಹೆಸರನ್ನು ಸೂಚಿಸಿದ ತರಗತಿ ಅಂತಿಮ ಬಿ.ಕಾಂ. (ಬಿ) ವಿಭಾಗ ವಿಶೇಷ ಬಹುಮಾನದ ಜೊತೆಗೆ ಬೆಸ್ಟ್ ವಿಡಿಯೋ ಬಹುಮಾನವನ್ನು, ದ್ವಿತೀಯ ಬಿ.ಕಾಂ. (ಬಿ) ವಿಭಾಗದ ನಾಗಶ್ರೀ ಭಟ್ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿಯನ್ನು ಅಂತಿಮ ಬಿಬಿಎ ಅತ್ಯದ್ಭುತ ಸಾರಾಂಶ ಪ್ರಕಟಣೆ ಪ್ರಶಸ್ತಿಯನ್ನು ಪಡೆದರು.

Leave a Reply

Your email address will not be published. Required fields are marked *

You May Also Like

ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜು ಕಕ್ಯಪದವು 100% ಫಲಿತಾಂಶ

ಕಕ್ಯಪದವು : ಎಲ್.ಸಿ.ಆರ್ ವಿದ್ಯಾಸಂಸ್ಥೆಯ 2023-24 ನೇ ಶೈಕ್ಷಣಿಕ ಸಾಲಿನ ( NEP ) ಮಂಗಳೂರು…

Local Talent Shines Bright: Trisha from Belthangady Selected for DKD Reality Show

Ms. Trisha, talented daughter of Mr. Prashant and Mrs. Shailaja, Guruvayanakere, has…

St. Joseph’s P U College, Bajpe Hosts Students’ Council Inauguration and Investiture Program

Bajpe, 23 June 2025: St. Joseph’s P U College, Bajpe held the…

ಗಾಯನ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ 

ಇರ್ವತ್ತೂರು, ಆಗಸ್ಟ್ 16, 2024 : ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು…